Saturday, 21 November 2015
Wednesday, 14 October 2015
ಬಣ್ಣದ ಮೇಳ 2015
ನಮ್ಮ ಶಾಲೆಯ ಆವರಣದಲ್ಲಿ ದಿನಾಂಕ 10-10-2015ರಿಂದ ಆರಂಭವಾದ ಬಣ್ಣದ ಮೇಳ 2015 ಐದು ದಿನಗಳ ಕಾಲ ನಡೆಯಿತು. ಮುರಳೀಧರ ಎಚ್. ವಿ., ಸೂರ್ಯಕಾಂತ ನಂದೂರ, ರಾಮಗಿರಿ ಪೊಲೀಸ ಪಾಟೀಲ, ಮನು ಮಯ್ಸೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಡೇ ದಿನ ನಂಜನಗೂಡಿನ ಅಗ್ನಿಶಾಮಕ ಠಾಣೆಯ ಬಿ.ಜಿ. ಉತ್ತಪ್ಪ, ಯೋಗೀಶ, ಪರಶಿವಮೂರ್ತಿ, ಮರಿಯಪ್ಪ ಅವರು ಪ್ರಾತ್ಯಕ್ಷಿಕೆ ನೀಡಿದರು. ಮೇಳದಲ್ಲಿ ಹಾಡು, ಚಿತ್ರ, ಗೊಂಬೆ ತಯಾರಿ, ಒರಿಗಾಮಿ, ಗ್ರೀಟಿಂಗ್ಸ್, ಪೇಪರ್ ಫೋಲ್ಡ್ ಮಾಡಿ ಪ್ರಾಣಿ ಪಕ್ಷಿಗಳನ್ನು ಮಾಡುವುದು, ಗಣಿತದ ಆಕೃತಿಗಳಿಂದ ಚಿತ್ರ ಮಾಡುವುದು, ವನ್ಯಜೀವಿಗಳ ಕುರಿತು ಸಿನಿಮಾ ವೀಕ್ಷಣೆ ನಡೆಯಿತು. ಮಕ್ಕಳಿಗೆ ಸಂಭ್ರಮದ ಹೊನಲನ್ನೇ ಹರಿಸಿದ ಈ ಮೇಳದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೇಳವು ಶಾಲೆಯ ರಂಗಶಿಕ್ಷಕ ಸಂತೋಷ ಗುಡ್ಡಿಯಂಗಡಿ ನೇತೃತ್ವದಲ್ಲಿ ನಡೆಯಿತು
ವಿಜಯವಾಣಿಯಲ್ಲಿ ಬಣ್ಣದ ಮೇಳದ ಸುದ್ಧಿ
ಮೇಳದಲ್ಲಿ ನಾವುಗಳು ಮತ್ತು ನಮ್ಮ ಚಿತ್ರಗಳು
ಮುರಳೀಧರ ಎಚ್. ವಿ
ಸೂರ್ಯಕಾಂತ ನಂದೂರ
ರಾಮಗಿರಿ ಪೊಲೀಸ ಪಾಟೀಲ
ಮನು ಮಯ್ಸೂರು
ಮೇಳದಲ್ಲಿ ಹೀಗೊಂದು ಗ್ರೂಪ್ ಫೋಟೋ
Wednesday, 7 October 2015
ರಾಜ್ಯಮಟ್ಟಕ್ಕೆ ಹೆಗ್ಗಡಹಳ್ಳಿ ಮಕ್ಕಳು
ದಿನಾಂಕ 30-09-2015ರಂದು ಮಯ್ಸೂರಿನ ಸಿಟಿಇ ಆವರಣದಲ್ಲಿ ನಡೆದ ಮಯ್ಸೂರು ವಿಭಾಗಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಹೆಗ್ಗಡಹಳ್ಳಿಯ ಮಕ್ಕಳು ಮಯ್ಸೂರು ಜಿಲ್ಲೆಯನ್ನು ಪ್ರತಿನಿಧಿಸಿ ಅಭಿನಯಿಸಿದ "ಭೂಮಿಗೆ ಜ್ವರ ಬಂದಿದೆ" ನಾಟಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ನಾಟಕ ಸ್ಪರ್ಧೆಯ ಉದ್ಘಾಟನೆ ಮಯ್ಸೂರು ಮೇಯರ್ ಲಿಂಗಪ್ಪ ಹಾಗೂ ಸಿಟಿಇ ಪ್ರಾಂಶುಪಾಲರಾದ ಬಿ.ಕೆ.ಬಸವರಾಜು ಅವರಿಂದ.
ಸಿಓ2 ಪಾತ್ರಕ್ಕೆ ಉತ್ತಮ ನಟ ಬಹುಮಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿ ಲೋಕೇಶ ಎಚ್.ಎಂ.
ಉತ್ತಮ ನಟಿ ಬಹುಮಾನ ಪಡೆದ ಮಂಡ್ಯ ಜಿಲ್ಲೆಯ ಕಾವ್ಯ ಡಿ. ಆರ್.
ಪ್ರಥಮ ಬಹುಮಾನ ಮಯ್ಸೂರು ಜಿಲ್ಲೆ (ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ)
ದ್ವಿತೀಯ ಬಹುಮಾನ ಕೊಡಗು ಜಿಲ್ಲೆಯ ತಂಡ
ತೃತೀಯ ಬಹುಮಾನ ಮಂಡ್ಯ ಜಿಲ್ಲೆಯ ತಂಡ
ಭೂಮಿಗೆ ಜ್ವರ ಬಂದಿದೆ ನಾಟಕದ ಕೆಲವು ದೃಶ್ಯಗಳು
Subscribe to:
Posts (Atom)
