Monday 18 August 2014




ಹತ್ತನೇ ಸಂಚಿಕೆ

_____________________________________________________________

ಕುಸ್ತಿಯಲ್ಲಿ ಪ್ರಶಸ್ತಿ



ಇತ್ತೀಚೆಗೆ ಮೈಸೂರಿನ ಲಯನ್ಸ್ ಸೆಂಟ್ರಲ್ ಸಮುಚ್ಛಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಉಮೇಶ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 10ನೇ ತರಗತಿ ಕೇಶವಮೂರ್ತಿ ಡಿ. ಎಸ್. ತೃತೀಯ ಸ್ಥಾನ ಪಡೆದಿರುತ್ತಾನೆ. ಈ ಇಬ್ಬರೂ ಕುಸ್ತಿ ಪೈಲ್ವಾನರಿಗೆ ‘ಅಳ್ಳೀಮರ’ ಶುಭಕೋರುತ್ತದೆ.
*******************************

ಅತ್ಯಾಚಾರ :- ಮಕ್ಕಳ ಸ್ಪಂದನೆ


ಇತ್ತೀಚೆಗೆ ಅತ್ಯಾಚಾರ ಹೆಚ್ಚಾಗಿದೆ. ಗಂಡು ಮಕ್ಕಳಿಗೆ ಸಮಾಜದ ಬಗ್ಗೆ ಭಯವಿಲ್ಲ, ಯಾರೇನಂದರೂ ಹೆದರಿಕೆ ಇಲ್ಲ. ಯಾರ ಮಾತನ್ನೂ ಕೇಳುವುದಿಲ್ಲ. ಯೋಚನೆ ಮಾಡುವುದಿಲ್ಲ. ದುರಾಸೆ ಸ್ವಾರ್ಥ ಇವೆಲ್ಲ ಮನುಷ್ಯನಲ್ಲಿ ಹೆಚ್ಚಾಗಿಬಿಟ್ಟಿದೆ.
ಹೆಣ್ಣು ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಹಾಗಂತ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಹಿಸಬೇಡಿ ಅಂತಲ್ಲ. ಅವರು ಚನ್ನಾಗಿ ಓದಲಿ. ಗಂಡು ಮಕ್ಕಳು ಅಂದರೆ ಎಲ್ಲಾ ಗಂಡು ಮಕ್ಕಳೂ ಅಲ್ಲ. ಓದದೆ ಶಾಲೆಗೆ ಬಾರದೆ ಇರ್ತಾರಲ್ಲ ಅಂತಹ ಮಕ್ಕಳನ್ನ ಊರಿನ ಮುಖಂಡರು, ಆರಕ್ಷಕರು ಕಂಡು ಹಿಡಿದು ಅವರಿಗೆ ಒಳ್ಳೆಯ ಬುದ್ಧಿಯನ್ನ ಕಲಿಸಬೇಕು.
-ಲೋಕೇಶ ಎಚ್. ಎಂ.
9ನೇ ತರಗತಿ, ಹೆಗ್ಗಡಹಳ್ಳಿ.
************************************************

ನಾನು ಕಂಡಂತೆ ಅತ್ಯಾಚಾರಕ್ಕೆ ಕಾರಣಗಳು
* ಆಕರ್ಷಣೆಯಿಂದ
* ದ್ವೇಷದಿಂದ
* ಮೋಸದಿಂದ
* ಮೋಹದಿಂದ
* ಪ್ರೀತಿಯಿಂದ
* ಅವರು ಮಾಡುವ ಕೆಲಸ ಅದೇ ಆಗಿರಬಹುದು
ಹೀಗೆ ತಡೆಗಟ್ಟಬಹುದು..
* ಮುಖ್ಯವಾಗಿ ನಮ್ಮನ್ನು ಕಾಪಾಡಿಕೊಳ್ಳಲು ಧೈರ್ಯ ಮತ್ತು ಶಕ್ತಿ ಇರಬೇಕು.
* ನ್ಯಾಯಕ್ಕಾಗಿ ಪ್ರತಿಭಟಿಸಬೇಕು.
* ಪೋಲಿಸರಿಗೆ ತಿಳಿಸಿ ದೂರು ಕೊಡಬೇಕು.
* ಎಚ್ಚರಿಕೆಯಿಂದ ತಿರುಗಾಡಬೇಕು, ಮನೆಯವರಿಗೆ ತಿಳಿಸಬೇಕು.
* ಕರಾಟೆ ಕಲಿತಿರಬೇಕು ಅಥವಾ ಕರಾಟೆ ಕಲಿತಿಲ್ಲದವರು ಜೊತೆಯಲ್ಲಿ ಖಾರದಪುಡಿಯನ್ನು ಇಟ್ಟುಕೊಳ್ಳಬೇಕು.
* ಯಾರಾದರು ಇಬ್ಬರಿಗೆ ಕಠಿಣವಾದ ಶಿಕ್ಷೆ ಕೊಟ್ಟರೆ ಮಿಕ್ಕವರು ಎಚ್ಚರಗೊಳ್ಳುತ್ತಾರೆ.
-ತೇಜ ಎಚ್. ಎಸ್.
10ನೇ ತರಗತಿ, ಹೆಗ್ಗಡಹಳ್ಳಿ.
****************************************
ಅತ್ಯಾಚಾರ ಮಾಡುವವರು
* ಅವರು ರೌಡಿಯಾಗಿರಬೇಕು
* ಅವರು ನೋಡುವ ದೃಷ್ಠಿ ಸರಿ ಇಲ್ಲದಿರಬೇಕು.
* ಅವರು ಶಾಲೆ ಬಿಟ್ಟವರಾಗಿರಬೇಕು.
* ಅವರು ಮೌಲ್ಯ ತಿಳಿಯದವರಾಗಿರಬೇಕು.
* ಅವರು ತಿಳುವಳಿಕೆ ಇಲ್ಲದವರಾಗಿರಬೇಕು.
* ಅವರು ಕೆಟ್ಟವರಾಗಿರುತ್ತಾರೆ.
-ಸುನಂದ ಎಂ. ಆರ್.
9ನೇ ತರಗತಿ, ಹೆಗ್ಗಡಹಳ್ಳಿ
***********************************************

ಅತ್ಯಾಚಾರವನ್ನು ಕುಟುಂಬಸ್ತರು ಮಾಡುವುದಿಲ್ಲ. ಸಮಾಜದಲ್ಲಿ ಕೆಟ್ಟವರು ಎನಿಸಿಕೊಂಡವರು ಅತ್ಯಾಚಾರ ಮಾಡುತ್ತಾರೆ.  ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅತ್ಯಾಚಾರ ಮಾಡುತ್ತಾರೆ. ಅತ್ಯಾಚಾರ ಮಾಡಿದವರನ್ನು ಹಿಡಿದು ಊರಿನಲ್ಲಿಯೇ ಶಿಕ್ಷೆ ಕೊಡಬೇಕು.

-ಸುರೇಶ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ.
**************************************************

ಸಣ್ಣ ನಾಯಿ


ಸಣ್ಣ ನಾಯಿ ದೊಡ್ಡ ಹಪ್ಪಳ
ಕಚ್ಚಿ ತಂತು
ಕುಟುಂ ಕುಟುಂ ಹರುಕು ಮುರುಕು
ತಿಂದು ಕುಣೀತು

ಸಣ್ಣ ನಾಯಿ ದೊಡ್ಡ ಲಡ್ಡು
ಉಂಡೆ ತಂತು
ಸಿಹಿಯ ನೆಕ್ಕಿ ಸವಿಯ ಮೆಚ್ಚಿ
ಬಾಲ ಕುಣಿಸಿತು

ಸಣ್ಣ ನಾಯಿ ದೊಡ್ಡ ಮೂಳೆ
ಎತ್ತಿ ತಂತು
ಆಚೆ ಮುರಿದು ಈಚೆ ಕಡಿದು
ಬಾಯಿ ಚಪ್ಪರಿಸ್ತು

ಸಣ್ಣ ನಾಯಿ ದೊಡ್ಡ ಗೊರಟು
ಹಿಡಿದು ತಂತು
ಉರುಳಿಸಿ ನೆಕ್ಕಿ ನಾಲಗೆ ತಿಕ್ಕಿ
ಪಿಳಿಪಿಳಿಗುಟ್ಟಿತು

ಸಣ್ಣ ನಾಯಿ ದೊಡ್ಡ ಚಪ್ಪಲಿ
ಕದ್ದು ತಂತು
ಕಚ್ಚಿ ಕಚ್ಚಿ ಜೂಲು ಮಾಡಿ
ಹರುಷದಿ ನೆಕ್ಕಿತು.

-ವಿಜಯಶ್ರಿ ಹಾಲಾಡಿ

(ನೀರ್ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿರುವ ವಿಜಯಶ್ರಿ ಹಾಲಾಡಿ ಅವರು ಕನ್ನಡದಲ್ಲಿ ಮಕ್ಕಳಿಗಾಗಿ ಬರೆಯುತ್ತಿರುವ ಪ್ರಮುಖರು. )



ಚಿತ್ರ : ಪ್ರಿಯಾಂಕ ಕೆ. ಎಂ.
9ನೇ ತರಗತಿ ಹೆಗ್ಗಡಹಳ್ಳಿ.
****************************************

ನರಿಯ ಜಾಣತನ

ಬೇಟೆಯಾಡಿ ತನ್ನ ಊಟ ಸಂಪಾದಿಸಿಕೊಳ್ಳಲಾಗದಷ್ಟು ವಯಸ್ಸಾದ ಸಿಂಹ ಒಂದು ಉಪಾಯ ಹುಡುಕಿತು. ಅದು ಒಂದು ಗುಹೆಯೊಳಗೆ ನನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕ ಮಾಡಿತು. ಇದನ್ನು ತಿಳಿದ ಪ್ರಾಣಿಗಳು ಸಿಂಹದ ಆರೋಗ್ಯ ವಿಚಾರಿಸಲು ಅದರ ಗುಹೆಗೆ ಬಂದವರನ್ನು ಸಿಂಹ ತನ್ನ ಆಹಾರವನ್ನಾಗಿ ಹಿಡಿದು ತಿನ್ನತೊಡಗಿತು. ಇದನ್ನು ತಿಳಿದ  ನರಿ ಒಂದು ದಿನ ಸಿಂಹದ ಆರೋಗ್ಯ ವಿಚಾರಿಸಲು ಗುಹೆ ಬಳಿ ಬಂದು ‘ಏನು ಸಿಂಹಣ್ಣ ನಿನ್ನ ಆರೋಗ್ಯ ಚೆನ್ನಾಗಿದೆಯೇ?’ ಎಂದು ಕೇಳಿತು. ಅದಕ್ಕೆ ಸಿಂಹಣ್ಣ ‘ಸ್ವಲ್ಪ ಮಟ್ಟಿಗೆ ಸುದಾರಿಸಿದೆ ತಮ್ಮಯ್ಯಾ’ ಎಂದು ಹೇಳಿ, ‘ಯಾಕೆ ಹೊರಗಡೆಯೆ ನಿಂತಿದಿಯಾ ಒಳಗಾದರೂ ಬರಬಾರದೇ?’ ಎಂದು ಹೇಳಿತು. ಅದಕ್ಕೆ ನರಿ ‘ಒಳಗೆ ಬಂದವರು ಹೊರಗಡೆ ಬಂದಿರುವ ಹೆಜ್ಜೆಯ ಗುರುತುಗಳೇ ಕಾಣುತ್ತಿಲ್ಲ!’ ಎಂದು ನರಿ ಸಿಂಹದ ಉತ್ತರಕ್ಕೆ ಕಾಯದೆ ಅಲ್ಲಿಂದ ಓಡಿ ಹೋಯಿತು.

ಸಂಗ್ರಹ : ದೀಪಿಕಾ ಎಚ್. ಪಿ.
9ನೇ ತರಗತಿ ಹೆಗ್ಗಡಹಳ್ಳಿ.
****************************************

ವೇದ ಸುಳ್ಳಾದರು ಗಾದೆ ಸುಳ್ಳಾಗದು!
* ಅಗ್ಗದ ಶೆಟ್ಟಿ ; ಮುಗ್ಗಿದ ಜೋಳ
* ಅಜ್ಜಿ ನೂತಿದ್ದೆಲ್ಲಾ ಅಜ್ಜನ ಉಡಿದಾರಕ್ಕೆ
* ಅವ್ವ ಸತ್ತ ಮೇಲೆ ಅಪ್ಪ ಚಿಕ್ಕಪ್ಪ
* ಅಟ್ಟ ಹತ್ತದವನು; ಬೆಟ್ಟ ಹತ್ತಿಯಾನೆ!
* ಅಳದಿದ್ದರೆ ಅಮ್ಮನೂ ಹಾಲುಣಿಸಳು
* ಅಳಿಲು ಏರಿದರೆ ಅರಳಿಮರ ಅಲ್ಲಾಡಿತೆ!
ಸಂಗ್ರಹ : ಸುಮತಿ ಕೆ.
9ನೇ ತರಗತಿ. ಹೆಗ್ಗಡಹಳ್ಳಿ
********************************



ಚಿತ್ರ : ವಸಂತ ಕುಮಾರ್ ಡಿ. ಪಿ.
9ನೇ ತರಗತಿ, ಹೆಗ್ಗಡಹಳ್ಳಿ.
****************************************


ಚಿತ್ರ : ಶಿಲ್ಪ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ.
****************************************

ನಾಳೆಗಳು ನಮ್ಮದು...

ಮತ್ತೆ ತಾಯಿ ಕಬಿನಿ ಮೈದುಂಬಿದ್ದಾಳೆ. ಅಳ್ಳೀಮರದ ಊರು ನಳನಳಿಸುತ್ತಿದೆ. ರೈತರೆಲ್ಲ ಮೈಮುರಿದು ದುಡಿಯುತ್ತಿದ್ದಾರೆ ನಾಳೆಗೆ ನಾವೆಲ್ಲ ಉಣ್ಣಲು...
ಆದರೆ ನಾಳೆಗಳಲ್ಲಿ ನಲಿಯಬೇಕಾದ ನಮ್ಮ ಮಕ್ಕಳು ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳಿಂದಾಗಿ ನಲುಗಿ ಹೋಗಿದ್ದಾರೆ. ಯಾರು ಸಮೃದ್ಧ ನಾಳೆಗಳನ್ನು ಮಕ್ಕಳಿಗೆ ನಿರ್ಮಾಣ ಮಾಡಿಕೊಡಬೇಕಾಗಿದೆಯೋ ಅವರೇ ಮಕ್ಕಳ ಪಾಲಿನ ದುಃಸ್ವಪ್ನವಾಗುತ್ತಿದ್ದಾರೆ. ಏನು ಮಾಡಬಹುದು? ಗೊತ್ತಿಲ್ಲ. ಗೊಂದಲದಲ್ಲೇ ನಮ್ಮ ಮಕ್ಕಳು ಒಂದಷ್ಟು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ನಾಳೆಗಳು ನಮ್ಮದು. ಅದಕ್ಕೇ ಈ ಸಂಚಿಕೆ
-ಸಂ.

Thursday 7 August 2014

ಕೆ. ಜಿ. ಜಗನ್ನಾಥ್ ರಾವ್ ಸರ್ಕಾರಿ ಪ್ರೌಢ ಶಾಲೆ, ಕೋಣಿ. 
ಕುಂದಾಪುರ (ತಾ) ಉಡುಪಿ (ಜಿ)

ಇಲ್ಲಿನ ಮಕ್ಕಳ ಪತ್ರಿಕೆ

"ಈ ಮಿಂಚು"

ಸಂಪಾದಕರು : ಸದಾನಂದ ಬೈಂದೂರು






ಸರ್ಕಾರಿ ಪ್ರೌಢ ಶಾಲೆ, ಕೋಣಂದೂರು, ತೀರ್ಥಹಳ್ಳಿ (ತಾ) ಶಿವಮೊಗ್ಗ (ಜಿ)

ಇಲ್ಲಿನ ಮಕ್ಕಳ ಪತ್ರಿಕೆ

"ಮಲೆನಾಡ ಇಳೆ"

ಸಂಪಾದಕರು : ಶ್ರೀಕಾಂತ ಕುಮಟಾ (ನಾಟಕ ಶಿಕ್ಷಕರು)