Saturday 19 July 2014



ಅಳ್ಳೀಮರಕ್ಕೆ ವರುಷ ಸಮಾರಂಭ 18-07-2014

ಅಂದು ಶುಕ್ರವಾರ. ಹೆಗ್ಗಡಹಳ್ಳಿಯಲ್ಲಿ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ. ಆದರೆ ಮಕ್ಕಳು ಮತ್ತು ನಮ್ಮೊಳಗೆ ಏನೋ ಆತಂಕ ಮತ್ತು ಸಂಬ್ರಮ. ಮಳೆ ಮದ್ಯಾಹ್ನ ನಿಲ್ಲದಿದ್ದರೆ ನಮ್ಮ ಕಾರ್ಯಕ್ರಮ ಸಾಂಗವಾಗಿ ನಡೆಯುವುದು ಸಾಧ್ಯವಿಲ್ಲ. ಆದರೂ ಕಾರ್ಯಕ್ರಮದ ತಯಾರಿ ನಡದೇ ಇತ್ತು. ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ ಕೆ. ವೆಂಕಟರಾಜು ಸರ್ ಬೇಗನೆ ಬಂದಿದ್ದರು. ನಮ್ಮ ಶಾಲಾ ಆವರಣದೊಳಗೆ ಅಡಿಯಿಡುತ್ತಲೆ ಅವರ ಮೊದಲ ಉದ್ಘಾರ " ಎಷ್ಟು ಚನ್ನಾಗಿದೆ ವಾತಾವರಣ" 
ಅಡುಗೆ ಮನೆಯಲ್ಲಿ ಬಿಸಿಬಿಸಿ ಅನ್ನ ಸಾಂಬಾರಿನ ಜೊತೆ ಪಾಯಸದ ಪರಿಮಳ. ಈ ಮಳೆಯೋ ನಿಲ್ಲುವ ಹಾಗೆ ಕಾಣಿಸುವುದಿಲ್ಲ ಮಕ್ಕಳಲ್ಲಿ ಮತ್ತೆ ಆತಂಕ. ಮಳೆ ಚೂರು ಬಿಡುವು ಕೊಟ್ಟಿದ್ದೆ ಪಾಯಸ ತಟ್ಟೆಗೆ ಬಿತ್ತು. ಆಹಾ! ಸಂಭ್ರಮವೋ ಸಂಭ್ರಮ. ರುಚಿ ರುಚಿಯಾದ ಪಾಯಸವ ಉಂಡ ಕೂಡಲೆ ಮತ್ತೆ ಮಳೆ. ಮತ್ತೆ ಆತಂಕ ಕಾರ್ಯಕ್ರಮ ಮಾಡುವುದಕ್ಕೆ ಅಡ್ಡಿಯಾಗುತ್ತೋ ಅಂತ.

ಏನಾದರೂ ಆಗಲಿ ಕಾರ್ಯಕ್ರಮ ನಡೆಯಲಿ ಎಂದು ಆರಂಬಿಸಿಯೇ ಬಿಟ್ಟವು. ಮಳೆ ಮಕ್ಕಳು ನಡೆಸಿದ ಕಾರ್ಯಕ್ರಮವ ಕಂಡು ಸುರಿಯುವುದನ್ನೇ ನಿಲ್ಲಿಸಿ ದಂಗಾಗಿಬಿಟ್ಟಿತು. ವೇದಿಕೆಯ ಮೇಲೆ ದೊಡ್ಡವರಿದ್ದರೂ ಪೂರ್ಣ ಕಾರ್ಯಕ್ರಮ ಮಕ್ಕಳೆ ನಡೆಸಿದರು. ನಿರೂಪಣೆ- ದೀಪಿಕಾ, ಸ್ವಾಗತ-ಲೋಕೇಶ, ಪ್ರಸ್ಥಾವನೆ-ಶೀಲಾ, ವಂದನಾರ್ಪಣೆ- ಪ್ರಿಯಾಂಕ. ಮಕ್ಕಳು ಅರಳು ಹುರಿದಂತೆ ಮಾತನಾಡುವುದ ಕಂಡು ವಿಸ್ಮಯಪಟ್ಟಿದ್ದು ಹಿರಿಯರಾದ ವೆಂಕಟರಾಜು ಸರ್.

ಎಂಟನೇ ತರಗತಿಯ ಮಕ್ಕಳು ಹಾಡಿದ ಸಮಾನತೆಯ ಹಾಡಿನೊಂದಿಗೆ ಆರಂಭಗೊಂಡ ಕಾರ್ಯಕ್ರಮ ತುದಿಯವರೆಗೂ ಅಚ್ಚುಕಟಟಾಗಿ ನಡೆಯುವುದಕ್ಕೆ ಕಾರಣವಾದರು ಮಕ್ಕಳು. ವೇದಿಕೆ ನಿರ್ಮಾಣ ಮಾಡುವುದರಿಂದ ಹಿಡಿದು ಕಡೆಯಲ್ಲಿ ಎಲ್ಲವನ್ನು ಅವುಗಳ ಸ್ಥಾನಕ್ಕೆ ತಲುಪಿಸುವವರೆಗೆ ಅವರದೇ ಕೈಚಳಕ. "ನಮ್ಮ ಅಳ್ಳೀಮರ" ಎಂಬ ಅಭಿಮಾನ ಇಡೀ ಸಮಾರಂಭವನ್ನು ಸುಂದರವಾಗಿಸಿತು.


 ವೇದಿಕೆ ಸಜ್ಜಾಗಿದೆ

 ಎಂಟನೇ ತರಗತಿ ಮಕ್ಕಳಿಂದ ಸಮಾನತೆಗಾಗಿ ಆರಂಭ ಗೀತೆ

 ಎರಡನೇ ವರ್ಷದ ಮೊದಲ ಸಂಚಿಕೆ ಬಿಡುಗಡೆ.
(ಎಡದಿಂದ ಕೇಶವಮೂರ್ತಿ. ಫಾಮಿದಾ ಬೇಗಂ, ಅಂಬುಜಾ, ಆರ್. ಪರಶಿವಮೂರ್ತಿ, ಶ್ರೀಧರ ಭಟ್ಟ್, ಕೆ. ವೆಂಕಟರಾಜು, ಎ. ಎಂ. ಲಿಂಗರಾಜು, ಟಿ. ಆರ್. ಮಂಜುನಾಥ್.)


 ಕೆ. ವೆಂಕಟರಾಜು ಅವರು ಪತ್ರಿಕೆ ಬಿಡುಗಡೆಗೊಳಿಸಿ ಮಾತಾಡುತ್ತಿರುವುದು.


ನಂಜನಗೂಡಿನ ಹಿರಿಯ ಪತ್ರಕರ್ತರಾದ ಶ್ರೀಧರ ಭಟ್ಟರು ಮಾತನಾಡುತ್ತಿರುವುದು (ಆಂದೋಲನ ಪತ್ರಿಕೆ) 


 ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಾದ ಎ.ಎಂ. ಲಿಂಗರಾಜು ಅವರು ಮಾತಾಡುತ್ತಿರುವುದು

 ದೈಹಿಕ ಶಿಕ್ಷಕರಾದ ಆರ್. ಪರಶಿವಮೂರ್ತಿಯವರು ಮಾತನಾಡುತ್ತಿರುವುದು.


 ಕಾರ್ಯಕ್ರಮದ ರೂವಾರಿಗಳಾದ ನಮ್ಮ ಶಾಲೆಯ ವಿದ್ಯಾರ್ಥಿಗಳು

 ಕಾರ್ಯಕ್ರಮದ ನಿರೂಪಕಿ ಕುಮಾರಿ ದೀಪಿಕಾ

ಎಲ್ಲರನ್ನೂ ಸ್ವಾಗತಿಸಿದ ಲೋಕೇಶ 

ಪ್ರಸ್ತಾವಿಕ ಮಾತನ್ನಾಡಿದ ಕುಮಾರಿ ಶೀಲಾ 

ಎಲ್ಲರನ್ನೂ ವಂದಿಸಿದ ಕುಮಾರಿ ಪ್ರಿಯಾಂಕ 

ನಮ್ಮ ಅಳ್ಳೀಮರವ ನೋಡಿ 



ಕಾರ್ಯಕ್ರಮದ ಕುರಿತು ಪತ್ರಿಕಾ ವರದಿ
 ನಂಜನಗೂಡಿನ ಸತ್ಯಪ್ರಭ ಪತ್ರಿಕೆಯಲ್ಲಿನ ವರದಿ


ವಿಜಯವಾಣಿ ಪತ್ರಿಕೆಯಲ್ಲಿನ ವರದಿ
ದಿನಾಂಕ 18-07-2014ರ ಶುಕ್ರವಾರದಂದು ವಿಜಯವಾಣಿ ಪತ್ರಿಕೆಯಲ್ಲಿ ನಮ್ಮ "ಅಳ್ಳೀಮರ"ದ ಕುರಿತೊಂದು ವಿಶೇಷ ವರದಿ