Monday 17 February 2020

LIVE INTERACTION WITH EDUCATION MINISTER S. SURESH KUMAR IN GHS HEGGADAH...




ಶಿಕ್ಷಣ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ಅವರೊಂದಿಗೆ ನೇರ ವಿಡಿಯೋ ಸಂವಾದ.

ನಮ್ಮ ಶಾಲೆಯಲ್ಲಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಪ್ರಸಿದ್ಧರೊಂದಿಗೆ ನೇರ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ಶಿಕ್ಷಣ ಸಚಿವರೊಂದಿಗೆ ಸಂವಾದ ನಡೆಯಿತು. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಯ ಕುರಿತು ಕಿವಿಮಾತು ಹೇಳಿ ಸರ್ ಎಂದು ಕೇಳಿಕೊಂಡಾಗ ಅವರು ಒಪ್ಪಿಕೊಂಡರು. ಅದರಂತೆ ಫೆಬ್ರವರಿ 6 ರಂದು ಮದ್ಯಾಹ್ನ 2:30 ಸಚಿವರು ಸಮಯ ನೀಡಿದರು. ಅವರು ಬೆಂಗಳೂರಿನಿಂದ ಲೈವ್ ಆಗಿ ನಮ್ಮ ಮಕ್ಕಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ನಂಜನಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಅವರೊಂದಿಗೆ ಮಾತನಾಡಿ ತಾಲೂಕಿನಲ್ಲಿ ನಡೆಯುತ್ತಿರುವ ಪರೀಕ್ಷೆಯ ತಯಾರಿ ಕುರಿತು ಮಾಹಿತಿ ಪಡೆದರು.
ವಿಡಿಯೋ ಕರೆಯ ಮೂಲಕ ಹೀಗೆ ಸಂವಾದ ನಡೆಸುವುದು ಸಾಧ್ಯವಾಗಿದ್ದು ತಂತ್ರಜ್ಞಾನ ಮತ್ತು ಶಿಕ್ಷಕರ ಮೇಲೆ ನಂಬಿಕೆ, ಶಿಕ್ಷಕರನ್ನು ಹುರುದುಂಬಿಸುವ ಸಚಿವರಿಂದಾಗಿ. ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಶಾಲೆಗಳಲ್ಲಿ ನಡೆಯುತ್ತಿರುವ ಒಳ್ಳೆಯ ಕಾರ್ಯಗಳನ್ನು ಗಮನಿಸಿದ ತಕ್ಷಣ ಅಂತಹ ಶಾಲೆ, ಶಿಕ್ಷಕರನ್ನು ಸಂಪರ್ಕಿಸಿ ಬೆನ್ನುತಟ್ಟುವ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಶಿಕ್ಷಕರ ಅಚ್ಚುಮೆಚ್ಚಿನ ಸಚಿವರಾಗಿದ್ದಾರೆ.
ನಮ್ಮ ಶಾಲೆಯ ನಿಮ್ಮ ಕಸ ನಿಮಗೆ ಅಭಿಯಾನದ ಕುರಿತು ಪತ್ರಿಕೆಗಳಲ್ಲಿ ಬಂದ ಸುದ್ಧಿಯನ್ನು ನೋಡಿ ನಮ್ಮ ಶಾಲೆಯನ್ನು ಹುಡುಕಿಕೊಂಡು ಬಂದಿದ್ದರು. ಅಲ್ಲಿಂದ ನಮ್ಮ ಶಾಲೆಯ ಬಗ್ಗೆ ಗಮನಿಸುತ್ತಾ, ಶೈಕ್ಷಣಿಕ ಮಾಹಿತಿಗಳನ್ನು ಆಗಾಗ ತಿಳಿದು ಮೆಚ್ಚುಗೆ ಸೂಚಿಸುತ್ತಿದ್ದರು. ಹಾಗಾಗಿಯೇ ಮಕ್ಕಳೊಂದಿಗೆ ನೇರ ಸಂವಾದಕ್ಕೆ ಕೇಳಿಕೊಂಡಾಗ ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು. ಹೀಗೆ ಶಿಕ್ಷಣ ಸಚಿವರೊಂದಿಗೆ ನೇರ ಸಂವಾದ ನಮ್ಮ ಶಾಲೆಯಲ್ಲಿ ಸಾಧ್ಯವಾಯಿತು. ಅದಕ್ಕಾಗಿ ಸಚಿವರಿಗೆ ಮಕ್ಕಳೆಲ್ಲರ ಪರವಾಗಿ ವಂದನೆಗಳು.

ನಮ್ಮ ಶಾಲೆಯ ಸಂವಾದ ನಂತರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಚಿವರು ಬರೆದ ಬರಹ